ಮಂಗಳವಾರ, ಆಗಸ್ಟ್ 17, 2010

ರತ್ನಾಕರಶತಕ - ೪

ಅರಿವಿಂದೀಕ್ಷಿಸಲಕ್ಕು ಮಾತ್ಮನಿರವಂ ದೇಹಂಬೊಲೀ ಕಣ್ಗೆ ತಾಂ|
ಗುರಿಯಾಗಂ ಶಿಲೆಯೊಳ್ಸುವರ್ಣಮರಲೊಳ್ಸೌರಭ್ಯಮಾ ಕ್ಷೀರದೊಳ್ ||
ನರು ನೆಯ್ಕಾಷ್ಠದೊಳಗ್ನಿಯಿರ್ಪತೆರದಿಂದೀ ಮೆಯ್ಯಳೊಂದಿರ್ಪನೆಂ-
ದರಿದಭ್ಯಾಸಿಸೆ ಕಾಣ್ಗುಮೆಂದರುಪಿದೈ ರತ್ನಾಕರಾಧೀಶ್ವರಾ ||೪||



ಆತ್ಮನ ಇರುವನ್ನು ಅರಿವಿನಿಂದ ನೋಡಬೇಕು. ದೇಹದಲ್ಲಿರುವ ಕಣ್ಣಿನಿಂದ ನೋಡಿದರೆ ಆತ್ಮನು ಕಾಣುವುದಿಲ್ಲ. ಕಲ್ಲಿನಲ್ಲಿ ಚಿನ್ನ, ಹೂವಿನಲ್ಲಿ ಸುಗಂಧ, ಹಾಲಿನಲ್ಲಿ ಕೆನೆ ಮತ್ತು ಬೆಣ್ಣೆ, ಕಟ್ಟಿಗೆಯಲ್ಲಿ ಬೆಂಕಿಯಿರುವ ರೀತಿಯಲ್ಲೇ ಶರೀರದಲ್ಲಿ ಆತ್ಮನು ಸೇರಿದ್ದಾನೆಂದು ಅರಿತು ಸಾಧನೆಯಲ್ಲಿ ತೊಡಗಿದರೆ ಆತ್ಮನ ಗೋಚರವಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ