ಭಾನುವಾರ, ಆಗಸ್ಟ್ 15, 2010

ರತ್ನಾಕರಶತಕ - ೨

ತತ್ತ್ವಪ್ರೀತಿ ಮನಕ್ಕೆ ಪುಟ್ಟಲದು ಸಮ್ಯಗ್ದರ್ಶನಂ ಮತ್ತಮಾ |
ತತ್ತ್ವಾರ್ಥಂಗಳನೊಲ್ದು ಭೇದಿಪುದು ಸಮ್ಯಗ್ಜ್ಞಾನಮಾ ಬೋಧದಿಂ||
ಸತ್ತ್ವಂಗಳ್ಕಿಡದಂತುಟೋವಿ ನೆಡೆಯಲ್ಸಮ್ಯಕ್ಚರಿತ್ರಂ ಸುರ-|
ತ್ನತ್ನಂ ಮೂರಿವು ಮುಕ್ತಿಗೆಂದರುಪಿದೈ ರತ್ನಾಕರಾಧೀಶ್ವರಾ ||೨||


ಜೀವಾಜೀವಾದಿ ತತ್ವಗಳ ಬಗ್ಗೆ ಮನಸ್ಸಿನಲ್ಲಿ ಪ್ರೀತಿ ಹುಟ್ಟುವುದು ಸಮ್ಯಗ್ದರ್ಶನ. ಆ ತತ್ವಗಳನ್ನು ಅರಿತು, ಅವುಗಳನ್ನು ವಿಭಾಗಿಸಿ ಅರಿಯುವುದು ಸಮ್ಯಜ್ಞಾನವಾಗಿದೆ ಮತ್ತು ಇಂತಹ ಜ್ಞಾನದಿಂದ ತತ್ವಕ್ಕೆ ಲೋಪಬರದ ರೀತಿ ನೆಡೆಯುವುದು ಸಮ್ಯಕ್ಚಾರಿತ್ರವಾಗಿದೆ. ಈ ಮೂರು ರತ್ನಗಳು (ರತ್ನತ್ರಯ) ಮುಕ್ತಿಗೆ ಕಾರಣ.

1 ಕಾಮೆಂಟ್‌: